Showing posts with label ಶ್ರೀ ಧರೆಗೆ ದೊಡ್ಡವರ ಚರಿತೆ. Show all posts
Showing posts with label ಶ್ರೀ ಧರೆಗೆ ದೊಡ್ಡವರ ಚರಿತೆ. Show all posts

ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 28)

28. ಸಿದ್ಧರ ಗೆದ್ದ ಸಿದ್ದಪ್ಪಾಜಿ - ಶಾಪ ನೀಡಿದ ರಾಚಪ್ಪಾಜಿ (ಕೊನೆಯ ಸಂಚಿಕೆ)

ಹಾಗೆಯೇ ಇತ್ತ ಆದಿಮೂರ್ತಿಯ ಆಶೀರ್ವಾದದಿಂದ ಪ್ರೇರಿತರಾಗಿ ಸಿದ್ದಯ್ಯಸ್ವಾಮಿ ಮಠ ಬಿಟ್ಟು ಹೊರಟು ಬೆಳಕವಾಡಿ ಶಿವನಸಮುದ್ರಗಳನ್ನು ಭಕ್ತರ ಪ್ರೀತಿಯನ್ನು ಸ್ವೀಕರಿಸಿ ಮುಂದೆ ಬರುವಾಗ ತೆಂಗಿನ ಹಳ್ಳದ ಮಾರಿ ಎದುರಾಗಿ ಅಡ್ಡ ಬಿದ್ದು "ನಿನ್ನ ಭಕ್ತರ ಮೊದಲ ಪೂಜೆ ನನಗೆ ಕರುಣಿಸು' ಎನ್ನುತ್ತಾಳೆ. ಸ್ವಾಮಿ ಮಾರಿಯ ಬಯಕೆಯನ್ನು ಗೌರಿಸದೆ ಭಂಗಿ ಫಲಹಾರ ಮಾಡಿ ಮುಂದೆ ಹೊರಟು ಮಧ್ಯರಾತ್ರಿಯಲ್ಲಿ ಸುಕ್ಕಲಗರ ದುಷ್ಟ ಮಾರಿಗೆ ಎದುರಾಗುತ್ತಾರೆ; ಈ ಮಾರಿ ತನ್ನ ಶಕ್ತಿಯಿಂದ ಸ್ವಾಮಿಯನ್ನು ಸೋಲಿಸಲು ಯತ್ನಿಸಿ ಕಡೆಗೆ ಪ್ರಾಣಭಿಕ್ಷೆ ಬೇಡಿ ಉಳಿದುಕೊಳ್ಳುತ್ತಾಳೆ. ಸ್ವಾಮಿ ಅವಳನ್ನು ದಿಕ್ಕಿಲ್ಲರಿಗೆ ದಾರಿ ತೋರು ಎಂದು ಕೇಳಿ ದಾರಿಯನ್ನು ಅವಳಿಂದ ತಿಳಿದ ಕಾರಣಕ್ಕಾಗಿ ಅವಳಿಗೆ ದಾರಿ ತೋರಿದ ಜಾಗದಲ್ಲಿ ಭಕ್ತರಿಂದ ಪೂಜೆ ಸಲ್ಲುವಂತೆ ಆಶೀರ್ವದಿಸಿ ಮುಂದೆ ಹೊರಡುತ್ತಾರೆ.

ಸ್ವಾಮಿ ಸಿದ್ದಪ್ಪಾಜಿ ಚಿಕ್ಕಲ್ಲೂರಿಗೆ ಬರುತ್ತಿದ್ದಂತೆಯೇ ಅಲ್ಲಿ ಏಳು ಜನ ಋುಷಿಗಳು ಕಾಣಿಸಿಕೊಂಡು ಹುಣಸೆಯ ಉರಿಗೆ೦ಡದಲ್ಲಿ ಭಂಗಿ ಸೇದುತ್ತಾ ಇರುತ್ತಾರೆ. ಸ್ವಾಮಿ ಸಿದ್ದಪ್ಪಾಜಿ ಅವರುಗಳನ್ನು ಭಂಗಿಗಾಗಿ ಕೇಳಿದಾನ ಅವರುಗಳು "ನೋಡು ಸಿದ್ದಪ್ಪಾಜೀ ನಾವು ಹಾಗೂ ನೀನು ಒಂದು ಪವಾಡದಲ್ಲಿ ಭಾಗವಹಿಸಬೇಕು ಎರಡು ಗುಳಿಗೆಗಳನ್ನು ತೆಗೆಸಿ. ಗುಳಿಗೆ ಕಳ್ಳಿಹಾಲು ಎಕ್ಕದ ಹಾಲು, ಸುಣ್ಣ ತುಂಬಿಸಿ ಹುಣಸೆಯ ಹುರಿ ಗೆಂಡ ಸುರಿಸಿ ಒಂದರಲ್ಲಿ ನಾವು ಏಳು ಜನ ಇನ್ನೊಂದರಲ್ಲಿ ನೀನು ಒಬ್ಬ ಏಳುದಿನದ ವಾಯಿದೆ ಮೇರೆಗೆ ಇದ್ದು ಬಿಡುವುದು. ಯಾರು ಈ ಪವಾಡದಿಂದ ಸುರಕ್ಷಿತವಾಗಿ ಏಳನೆಯ ದಿನದ ನಂತರ ಹೊರಕ್ಕೆ ಬರುತ್ತಾರೋ ಅವರಿಗೆ ಚಿಕ್ಕಲ್ಲೂರಿನ ಮಠ ಭೇರಿ ನಿಷಾನಿ ಬಿರುದಿನ ಕೊಂಬುಕಹಳೆ" ಎನ್ನುತ್ತಾರೆ. ಸ್ವಾಮಿ ಈ ಪಂಥದ ಪವಾಡಕ್ಕೆ ಒಪ್ಪಿ "ನಾವು ಸೋತರೆ ನಮ್ಮ ಬಿರುದು ಪಾತಾಕೆಗಳೆಲ್ಲಾ ನಿಮ್ಮವು" ಎಂದು ಒಪ್ಪಿ ಚಿಕ್ಕೇಗೌಡನ ದೊಡ್ಡಿಯಿಂದ ಚಿಕ್ಕೆಗೌಡನನ್ನು ಮಧ್ಯಸ್ಥಿಕರಾಗಿ ಕರೆಸಿ ಯಾರು ಜೀವದಿಂದ ಉಳಿದೇ ಇರುತ್ತಾರೋ ಅವರ ಗುಳಿಯ ಮೇಲೆ ಏಳುದಿನದ ಹೊತ್ತಿಗೆ ಕೇರೆ ಗಿಡ ಹುಟ್ಟಿ ವಾಲಾಡುತ್ತಿರುತ್ತದೆ" ಎಂದು ಸನ್ನೆ ಹೇಳಿ ಎಲ್ಲರ ಮುಂದೆ ಗುಳಿಗೆ ಇಳಿಯುತ್ತಾರೆ. ಗುಳಿಗಳನ್ನು ಕಟ್ಟಿದ ಕಲ್ಲು ನಯಗಾರೆ ಕೆಮ್ಮಣ್ಣು ಹಾಕಿಸಿ ಮುಚಿಸಿ, ಅವರ ಮೇಲೆ ಕೀರ ಬೀಜವನ್ನು ಬಿತ್ತುತ್ತಾರೆ.

  ಸ್ವಾಮಿ ಗುಳಿಯಲ್ಲಿ ಕುಳಿತು, ಸಾಂಬ್ರಾಣಿ ಹಾಕಿ ಶಿವಪೂಜೆ ಮಾಡಿ ಕೈಲಾಸ ಮೂಡಿಸುತ್ತಾರೆ. ಏಳು ದಿನದ ಮೇಲೆ ಚಿಕ್ಕೇಗೌಡ ಬಂದು ಗುಳಿಯನ್ನು ನೋಡಲಾಗಿ, ಸಿದ್ಧಯ ಸ್ವಾಮಿಯ ಗುಳಿಯ ಮೇಲೆ ಕೀರೇಗಿಡ ವಾಲಾಡುತ್ತಿರುತ್ತದೆ. ಗೌಡ ಆನಂದದಿಂದ ಸ್ವಾಮಿಯನ್ನು ಹೊರಗೆ ಕರೆದುಕೊಂಡು ಪಾದಗಳಿಗೆ ಎರಗುತ್ತಾನೆ.
ಸತ್ತ ಏಳುಜನ ಋಷಿಗೂ ಸಮಾಧಿ ಕಟ್ಟಿಸಿದ ಸ್ವಾಮಿ ಜಾತ್ರೆಯ ವೇಳೆಯಲ್ಲಿ ಈ ಏಳೂ ಸಮಾಧಿಗಳಿಗೂ ಪೂಜೆಯಾಗಲಿ ಎಂದು ಅಪ್ಪಣೆ ಕೊಡಿಸುತ್ತಾರೆ. ಸ್ವಾಮಿ ಸಿದ್ದಯ್ಯ ಏಳು ಋುಷಿಗಳ ಮಠವನ್ನು ತಮ್ಮ ಅಧಿಕಾರಕ್ಕೆ ತೆಗೆದುಕೊಂಡು ವರ್ಷಂಪ್ರತಿಯ ಜಾತ್ರೆಯನ್ನು ವ್ಯವಸ್ಥೆ ಮಾಡಿಬಿಡುತ್ತಾರೆ.
ಗೌಡತಿಗೆ ಹೇಳಿ ಮಠದ ಉರಿಗದ್ದುಗೆಯ ಸ್ಥಳದಲ್ಲಿ ಪಾತಾಳ ಗುಹೆಯ ತೊಡೀಸಿ, ಬಾವಿಗೆ ಪುಣ್ಯಮಜ್ಜನ ಮಾಡಿಸಿ, ಜಯದ ಅಕ್ಷತೆಯನೆ ಇಟ್ಟು, ಆಕಾಶವನ್ನು ಹೊದಿಕೆಯಾಗಿ, ಭೂಮಿಯನ್ನು ತೊಟ್ಟಿಲಾಗಿ ಸೂರ್ಯ ನಕ್ಷತ್ರಗಳನ್ನು ನಂದಾದೀವಿಗೆಗಳಾಗಿ ಸ್ವೀಕರಿಸಿತ ತಮ್ಮ ದೀರ್ಘ ಸಮಾಧಿಗೆ ಸಿದ್ದಯ್ಯ ಸ್ವಾಮಿ ಹೋಗಿಬಿಡುತ್ತಾರೆ.

  ಹೀಗೆಯೇ ಫಲಾರದಯ್ಯ ಮುಟ್ಟಿನಹಳ್ಳಿ ತೋಪಿಗೆ ದಯಮಾಡಿಸಿ, ತಾಯಿ ತೋಪಿನ ದೊಡ್ಡಮ್ಮನವರು ಮತ್ತು ರಾಜಪ್ಪಾಜಿಯವರು ಪವಡಿಸಿದ್ದ ಜಾಗದಲ್ಲಿ ಅವರ ಪಾದಗಳಲ್ಲಿ ತಾನೂ ಪವಡಿಸಿ ಬಿಡುತ್ತಾನೆ.
  ಹಿರಿಯ ಗುರು ರಾಜೇಂದ್ರಸ್ವಾಮಿ ತಮ್ಮ ಗುರು ಹೋದ ಮಾರ್ಗದಲ್ಲೇ ತಾವು ಹೋಗಬೇಕೆಂದು ನಿರ್ಧರಿಸಿ ಬಸವನ ಮೇಲೆ ನಗಾರಿ ಹೇರಿಕೊಂಡು, ಬೇರೊಂದು ಬಸವನ ಮುಂದೆ ಬಿಟ್ಟುಕೊಂಡು ಕಪ್ಪಡಿಗೆ ಬಂದು ಗುರುವಿನ ಪಾದದಲ್ಲಿ ಲೀನವಾಗಿಬಿಡುತ್ತಾನೇ.
  ಕೆಳಗೆ ಪಾತಾಳದಲ್ಲಿ ಸ್ವಾಮಿಗೆ ರಾಚಪ್ಪಾಜಿ ಯೋಗಸಮಾಧಿಯಲ್ಲಿ ಇರುತ್ತಾರೆ. ರಾಜೇಂದ್ರಸ್ವಾಮಿಗೆ ಗುರುವನ್ನು ಕೂಡಲೇ ಮಾತನಾಡಿಸುವ ಹುಚ್ಚು, ಯಾರು ತಡೆದರೂ ಸ್ವಾಮಿ ನಿಲ್ಲದೆ ತನ್ನ ಗುರುವಿನ ತಪಸ್ಸನ್ನು ಭಂಗಗೊಳಿಸಿಬಿಡುತ್ತಾನೆ ಕೋಪಗೊಂಡ ರಾಚರಾಯ"ನಮ್ಮ ಸಮಾಧಿ ಸ್ಥಿತಿಯನ್ನು ಭಂಗಗೊಳಿಸಿದಿಕ್ಕಾಗಿ ನೀನು ಶಾಪಗ್ರಸ್ತನಾದೇ ನೀನು ಮತ್ತು ಮರ್ತ್ಯಕ್ಕೆ ಹಿಂದಿರುಗಿ ಬೊಪ್ಪಗೊ೦ಡ ಪುರಕ್ಕೆ ತೆರಳಿ ನಾವಿಲ್ಲಿ ಮಂಟೇದ ಸ್ವಾಮಿಯ ಆತ್ಮ ಲಿಂಗದಲ್ಲಿ ಸರಸಮಾಡುತ್ತಾ ದಿವ್ಯ ತೇಜಸ್ಸಾಗಿ ಇರುವ ಎಂದೆಂದಿಗೂ ಮೆರೆವ ಪವಾಡವನ್ನು ಸಾರು ಹೋಗು"ಎಂದು ಶಪಿಸಿಬಿಡುತ್ತಾರೆ.
ರಾಜೇಂದ್ರ ಸ್ವಾಮಿ ತಾನು ಬಯಸಿಬಂದುದೇ ಇದಕ್ಕಾಗಿ ಎಂದು ಸಂತೋಷಗೊಂಡು, ಬೊಪ್ಪಣ ಪುರದ ಶಿಷ್ಯರನ್ನೆಲ್ಲಾ ಕರೆದು. ಅಲ್ಲಿ ನೆಲಮಾಳಿಗೆಯಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ ಹಾಗೂ ಸಿದ್ದಪ್ಪಾಜಿ ಮೊದಲಾದವರ ಲೀಲಾಪವಾಡಗಳನ್ನು ಮೆರೆಸುತ್ತಿರುವ ದಿವ್ಯ ತೇಜಸ್ಸನ್ನು ಕುರಿತು ಹಾಡಿ ಹಾಡಿ ಆನಂದಿಸುತ್ತಾರೆ.

ಸಿದ್ದಯ್ಯ ಸ್ವಾಮೀ ಬನ್ನೀ
ಪವಾಡಗೆದ್ದಯ್ಯ ನೀವೇ ಬನ್ನಿ
ಜಯ ಜಯ ಎಂದು.

---end----: ಸಂಪೂರ್ಣ :---end----
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ
ನಿಮ್ಮ ಪ್ರೋತ್ಸಾಹವಿರಲಿ..  ಧನ್ಯವಾದಗಳು 🙏

👈 ಹಿಂದಿನ ಸಂಚಿಕೆ:
27. ಮೈಸೂರು ಅರಸರ ದೇವ ನಿಧಿಯೇ ರಾಚಪ್ಪಾಜಿ (ಉಪಸಂಹಾರ)
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/Rya8it
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/jJ64f3
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/eMVxcK
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 27)

27. ಮೈಸೂರು ಅರಸರ ದೇವ ನಿಧಿಯೇ ರಾಚಪ್ಪಾಜಿ (ಉಪಸಂಹಾರ)

ಸ್ವಾಮಿ ಮಂಟೇದಯ್ಯನವರ ಪಾದದಲ್ಲಿ ಮೂಡಿಬಂದ ಅಪ್ಪಣೆಯನ್ನು ಶಿರದ ಮೇಲೆ ಹೊತ್ತ ರಾಚಪ್ಪಾಜಿ ಮಡದಿ ತೋಪಿನ ದೊಡ್ಡಮ್ಮತಾಯಿಯನ್ನು ಕರೆದುಕೊಂಡು ಕಪ್ಪಡಿಯ ಗುರಿ ಹಿಡಿದು ಹೊರಟರು.
  ಆಯಾಸವಾಗಿ ತೋಪು ಒಂದರಲ್ಲಿ ತ೦ಗಲಾಗಿ, ಅಲ್ಲಿ ಮಡದಿ ದೊಡ್ಡಮ್ಮ ಮುಟ್ಟಾಗಿಬಿಡುತ್ತಾಳೆ. ಆಗ ಆ ತಾಯಿ ಏಳು ಸಲ ಸ್ನಾನ ಮಾಡಿ, ಏಳು ಸಲ ಮಡಿಯನ್ನು ತೊಟ್ಟು, ದೇವರ ಹೆಸರೇಳಿ ಧೂಪ ಹಾಕುತ್ತಾರೆ. ಆದ್ದರಿಂದ ಆ ತೋಪಿಗೆ ಮುಟ್ಟನಹಳ್ಳಿ ತೋಪು ಎಂದು ಹೆಸರಾಗುತ್ತದೆ.
  ರಾಚಪ್ಪಾಜಿ ಮಡದಿಯನ್ನು ಕುರಿತು "ನೀನು ಕಪ್ಪಡಿಯ ಗುರಿಯಲ್ಲಿ ಹೊರಗಾದ ಕಾರಣ ನನ್ನೊಡನೆ ನೀನು ಬರುವುದು ಬೇಡ ನೀನು ಸ್ವಾಮಿಯ ಪಾದದಲ್ಲಿಯೇ ಇದ್ದುಬಿಡು ಹೋಗು. ಕಪ್ಪಡಿ ಕೈಲಾಸದಲ್ಲಿ ನಮಗೆ ಜಾತ್ರೆ ಆಗುವಾಗ ನಾನೇ ಉಗಾದಿ ಅಮಾವಾಸ್ಯೆಯ ದಿನ ಇದೇ ಮುಟ್ಟನಹಳ್ಳಿಯ ತೋಪಿಗೆ ಬರುತ್ತೇನೆ, ಆಗ ಮತ್ತೆ ನನಗೂ ನಿನಗೂ ಕಲ್ಯಾಣವಾಗಲಿ ಎಂದು ಹೆಂಡತಿಗೆ ಮನ್ನಣೆಯ ಮಾತನ್ನು ಆಡಿ ಮುಂದೆ ಹೊರಡುತ್ತಾನೆ ನಮ್ಮ ಸಿರಿಗುರು ರಾಜಪ್ಪಾಜಿ.

  ಕೊಳತೂರ ಮೇಲೆ ಹಾದು ಬನ್ನೂರಿಗೆ ಬರುತ್ತಾನೆ. ಭಕ್ತರು ಅನೇಕರು ಪೂಜೆ ನಡೆಸಿ ಭಕ್ತಿಯ ಮಾಡುತ್ತಾರೆ. ಅಲ್ಲಿಂದ ಹೊರಟು ಮೈಸೂರಿನ ಕಾರಂಜಿಕೆರೆ ಎರಿಮೇಲೆ ನಿಲ್ಲುತ್ತಾರೆ. ಸಂಜೆ ಆಗುತ್ತಿದೆ_ ತೋಟಗಾರನೊಬ್ಬ ಎಲೆ ಮಂಡಿಗೆಗೆ ಅಗ್ಗಣಿಯನ್ನು ಎರೆಯುತ್ತಾನೆ. ಆತನನ್ನು ಮೂರುಸಲ ಕೂಗಿ ಕರೆಯುತ್ತಾರೆ. ಆತ ರಾಚಪ್ಪಾಜಿಯನ್ನು ಯಾರೋ ಎಲೆ ಕೂಯ್ಯಲು ಬಂದ ಕಳ್ಳನೆಂದು ಭ್ರಮಿಸಿ ಮೌನವಾಗಿ ಉಳಿದುಬಿಡುತ್ತಾನೆ. ಕೋಪಗೊಂಡ ಸ್ವಾಮಿ "ನಿನ್ನ ಎಲೆಯ ಮಂಡಿಗೆ ಎಲ್ಲ ಬತ್ತಿ ಹೋಗಲಿ, ಪಿಡಿದಿರುವ ಗುಂಬಾ ಎರಡೂ ಇಲ್ಲದೆ ಹೋಗಲಿ ನಿನ್ನ ಬಾವಿಯ ಗಂಗೆ ಬತ್ತಿ ಹೋಗಲಿ" ಎಂದು ಶಾಪ ಹಾಕುತ್ತಾನೆ. ಸ್ವಾಮಿ_ಶಾಪ ಫಲಿಸಿ ತೋಟ ಹಾಳಾಗಿಹೋಗಿ ಬಿಡುತ್ತದೆ. ಆಗ ತೋಟಗಾರ ಓಡೋಡಿ ಬಂದು, ಸ್ವಾಮಿಗೆ ನಮಸ್ಕರಿಸಿ, ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ. ಸ್ವಾಮಿಗೆ ಕನಿಕರ ಮೂಡಿ ಧೂಳ್ತವನ್ನು ತೋಟಕ್ಕೆ ಎರಚುತ್ತಾರೆ. ತೋಟ ಮೊದಲಿನಂತೆ ಫಳಫಳನೆ ಚಿಗುರಿ ನಿಲ್ಲುತ್ತದೆ. ಬಾವಿಯಲ್ಲಿ ನೀರು ಮೊದಲಿಗಿಂತಲೂ ಹೆಚ್ಚಾಗಿ ಉಕ್ಕಿ ಹರಿದಾಡುತ್ತದೆ. ಒಡೆದುಹೋದ ಗುಂಬ ಹೊಂದಿಕೊಂಡಿಬಿಡುತ್ತದೆ.

  ಸ್ವಾಮಿ ಆಗ ಬಾವಿ ತರೆಯ ಬಿಳಿಸಿ ಇರುವ ಎಳೆಯ ಬಾಳೆಯ ಸುಳಿಯಲ್ಲಿ ಹೋಗಿ ಪವಡಿಸಿಬಿಡುತ್ತಾರೆ ಗಳಿಗೆ ಒಂದರಲ್ಲಿ ಮುನ್ನೂರು ಮೂವತ್ತು ವರ್ಣಗಳ ಹೊಂದುತ್ತಿದ್ದರ೦ತೆ, ಸ್ವಾಮಿ ತೋಟಗಾರನಿಗೆ ಹೇಳುತ್ತಾರೆ. "ಮೂಲೂಜ್ಯದಿಂದ ಎಳಪಾಗಿ ಬಂದಿದ್ದೇನೆ ಮೂರು ಎಳನೀರನ್ನು ನನಗೆ ಕೊಡು" ತೋಟಗಾರ ಉತ್ತರಿಸುತ್ತಾನೆ: "ಸ್ವಾಮಿ ನಮ್ಮ ಮೈಸೂರಿನ ದೇವರಾಜ ಒಡೆಯರಿಗೆ ಒಹಳೆ ಬಡಸ್ತನ. ಹುಟ್ಟಿದ ಕುರುಪೆಯನ್ನೆಲ್ಲಾ ಲೆಕ್ಕ ಬರೆಯುತ್ತಾರೆ. ಧರ್ಮಗುರು. ನನಗೆ ಕೊಡುವ ಅಧಿಕಾರವೇ ಇಲ್ಲ, ಸ್ವಾಮಿ.
  ಆಗ ರಾಜಪ್ಪಾಜಿ ತಾನೆ ಕೈಬೀಸಿ ತೆಂಗಿನಮರಗಳಿಗೆ ಕರೆಕೊ೦ಡುತ್ತಾರೆ. ಅವುಗಳು ಬಾಗಿ, ಮೊಗಳು ತೆಗೆದುಕೊಂಡು ಸ್ವಾಮಿಗೆ ಎಡೆ ಯಾಗುತ್ತವೆ. ತೋಟಗಾರ ರಾಜ ದೇವರಾಜ ಒಡೆಯರಿಗೆ ಸುದ್ದಿ ಕೊಡುತ್ತಾನೆ. ಕೂಡಲೇ ಒಡೆಯರು ಪಲ್ಲಕ್ಕಿಯ ತರಿಸಿ. ಸೂಳಿಯರ ಮೇಳ ಕಟ್ಟಿಸಿಕೊಂಡು ಕಾರಂಜಿಯ ತೋಟಕ್ಕೆ ಓಡೋಡಿ ಬಂದು ಸ್ವಾಮಿಯ ಪಾದಕ್ಕೆ ಎರಗಿ, "ಪ್ರಭು, ನಿಮ್ಮ ನಿಜರೂಪನ್ನು ತೋರಿ. ಈ ಭಕ್ತನನ್ನು ಉದ್ಧರಿಸಿ" ಎಂದು ಕೇಳಿಕೊಳ್ಳುತ್ತಾನೆ, ಸ್ವಾಮಿ ದೇವರಾಜ ನಿಜಭಕ್ತಿಗೆ ಮೆಚ್ಚಿ, ಪಲ್ಲಕ್ಕಿಯಲ್ಲಿ ಮಗುವಾಗಿ ಮೈದಳೆದು ನುಡಿಯುತ್ತಾರೆ.

  "ಮೈಸೂರಿನ ಅರಸನಾದ ನೀನು ಬಡತನದಲ್ಲಿ ಇದ್ದೀಯೆ. ನಿನಗೆ ಒಪ್ಪುವಂತೆ ಸಿರಿ ಸಂಪತ್ತನ್ನು ನಾನು ಕರುಣಿಸುವೆ, ನಿನಗೆ ನಿಜಕ್ಕೂ ಇರುವ ಗಂಡಾಂತರವೆ೦ದರೆ ಕಾರ್ಗಳ್ಳಿಯ ಹಂಪಣ್ಣನಾಯಕ ತನ್ನ ಮೂವರು ಮಡದಿಯರಿಗೂ ಮಕ್ಕಳಿಲ್ಲದ ಕಾರಣ ಹಿರಿಯ ಮಗಳನ್ನು ಈಗಾಗಲೇ ಕೇಳುತ್ತಿದ್ದಾನೆ. ಮತ್ತು ನೀನು ಕೊಡದೇ ಹೋದರೆ ನಿನ್ನ ಮೇಲೆ ದಂಡೆತ್ತಿ ಬಂದು ನಿನ್ನ ಮಗಳನ್ನು ಪಡೆಯುವ ಸಂಧಾನದಲ್ಲಿ ದ್ದಾನೆ. ಅವನು ಸಿರಿ ವಂತನಾದ್ದರಿಂದ ಅವನನ್ನು ಉಪಾಯದಿಂದ ನೀನು ಗೆಲ್ಲಬೇಕಾಗುತ್ತದೆ ಹೆಣ್ಣನ್ನು ಕೊಡುತ್ತೇನೆಂದು ಓಲೆ ಬರೆಸಿ, ಅವನ ಪರಿವಾರವನ್ನು ಕರೆಸಿ, ಬೇರೆ ಬಿಡಾರದಲ್ಲಿ ತಂಗಲು ಹೇಳಿ ಅವರು ತಂಗಿದ ಮೇಲೆ ಅವರನ್ನೆಲ್ಲಾ ಸುಟ್ಟು ಭಸ್ಮಮಾಡಿ ಬಾವಿಗಳಿಗೆ ತುಂಬಿಬಿಡು, ನಂತರ ಗುಟ್ಟನ್ನು ಬಯಲು ಮಾಡದೆ ಹಂಪಣ್ಣನಾಯಕನಿಗೆ ಧಾರೆ ಎರಿಸಿಕೊಳ್ಳಲು ಬಾ ಎಂದು ಅಂಬಾರಿ ಆನೆ ಕಳುಹಿಸು, ಅಂಬಾರಿ ನಿನ್ನ ಕೋಟೆಯ ಬಾಗಿಲಿಗೆ ಬಂದ ಕೂಡಲೇ ಈರನಗೆರೆ ಮಂಚನಾಯಕನ ಕೈಯಲ್ಲಿ ಚಂದ್ರಯುಧ ಕೊಟ್ಟು ಹಂಪಣ್ಣ ನಾಯಕನನ್ನು ಕೊಂದು ಚೆಂಡಾಡಿಸು, ಅದೇ ಸಮಯದಲ್ಲಿ ಕಾರಗಳ್ಳಿಗೆ ನಿನ್ನ ಸೈನ್ಯ ನುಗ್ಗಿಸಿ, ಅರಮನೆ ಆಕ್ರಮಿಸಿ ಅವನ ಹೆಂಡಿರನ್ನು ಕಡಿಸಿ ಆಚೆಗೆ ಎಸೆ. ಆಗ ನಿನಗೆ ಎಪ್ಪತ್ತು ಕೋಟಿ ಆಸ್ತಿ ಅಂತಸ್ತು ಸಿಗುತ್ತದೆ" ಎನ್ನುತ್ತಾನೆ ಸ್ವಾಮಿ ರಾಚಯ್ಯ
ದೇವರಾಜ ಸ್ವಾಮಿಯ ಆಜ್ಞೆಯಂತೆ ಮಾಡಿ. ಮೈಸೂರಿನ ಕೀರ್ತಿ ಪ್ರತಿಷ್ಠೆಗಳನ್ನು ಹೆಚ್ಚಿಸುತ್ತಾರೆ. ಸ್ವಾಮಿ ರಾಚಪ್ಪನನ್ನು "ಏನಾದರೂ ಸೇವೆ ಸ್ವೀಕರಿಸಿ ಪ್ರಭು" ಎಂದು ಬೇಡಿಕೊಳ್ಳುತ್ತಾನೆ. ರಾಚರಾಯ, "ಅರಮನೆಯಲ್ಲಿ ನಾನು ಭೋಜನ ಮಾಡಬೇಕು___ವಿಧಿ ನಿಯಮಗಳಿಂದ ನನ್ನ ಆರೋಗಣೆಯಾಗಬೇಕು" ಎನ್ನುತ್ತಾನೆ. ಊಟಕ್ಕೆ ಬಡಿಸಿದನಂತರ ಎಲ್ಲರನ್ನೂ ಹೊರಗೆ ಹೋಗಲು ಹೇಳಿ, ಭಕ್ಷ್ಯ ಭೋಜ್ಯಗಳನ್ನು ಸುತ್ತ ಮುತ್ತೆಲ್ಲಾ ಚೆಲ್ಲಿ ರತ್ನ ಪಚ್ಚೆ ವಜ್ರ ವೈಡೂರ್ಯಗಳಾಗಿ ಮಾಡಿಕೊಡುತ್ತಾನೆ. "ಈ ಕೋಟಿ ಸಂಪತ್ತು ನಿನಗೆ ನೂರುಕಾಲ ಇರಲಿ ದೇವರಾಯ" ಎಂದು ಹೇಳಿ ಹರಸಿ ಮುಂದೆ ಕಪ್ಪಡಿಯ ಕೈಲಾಸದತ್ತ ಹೊರಟು ದಾರಿಯಲ್ಲಿ ತಮಗೆ ಕಪ್ಪಡಿಯಲ್ಲಿ ಬೇಕಾಗುವ ಪಾತಾಳಬಾವಿಯನ್ನು ತೋಡಲು ಉಪ್ಪರಿಗೆ ಶೆಟ್ಟಿಯ ಕನಸಿಗೆ ಬಂದು ಕಪ್ಪಡಿಗೆ ಕೂಡಲೇ ಬರಹೇಳಿ ಮುಂದೆ ಹೊರಟು ಕಾಟ ನಾಳಿನಕೆರೆ ಏರಿಗೆ ಬರುತ್ತಾರೆ.
ಅಲ್ಲಿನ ತೆಂಗಿನಮರಗಳು ತಾವೇ ಬಾಗಿ ಮುಗುಳು ತೆಗೆದುಕೊಂಡು ಸ್ವಾಮಿಗೆ ಎಡೆಯಾಗುತ್ತವೆ. ಆಗ ಸ್ವಾಮಿ ಅದನ್ನು ಪ್ರೀತಿಯಿಂದ ಸ್ವೀಕರಿಸಿ. "ನಿನ್ನ ಜಾತ್ರೆಗಾಗಿ ಇಲ್ಲಿಂದ ಎಳನೀರು ನಿಂಬೆಹಣ್ಣು ಬರಬೇಕೆಂದು ಆಜ್ಞಾಪಿಸಿ, ಹೊಸ ಕಪ್ಪಡಿಯ ಒಳಗಡೆಯ ನಿಧಿಯಲ್ಲಿ ಸ್ವಾಮಿ ಮೂರ್ತರಾಗುತ್ತಾರೆ. ಕೈಲಾಸದಲ್ಲಿ ಇಂದು ಹೊಸ ಕಪ್ಪಡಿಯ ಜಾತ್ರೆ ಶಿವರಾತ್ರಿ ಉಪ್ಪಲಿಗ ಶೆಟ್ಟಿ ತೋಡಿ ತೆಗೆದ ಪಾತಾಳ ಬಾವಿಯ ಆಳದಲ್ಲಿ ಸ್ವಾಮಿ ಮೂರ್ತರಾಗುತ್ತಾರೆ.

  'ಜಗದ ಜನರ ಹಂಗು ನಮಗೆ ಬೇಡ; ನಮ್ಮ ಹಂಗು ಮಾತ್ರ ಜಗತ್ತಿಗೇ ಇರಲಿ___ಎಂದು ಹೇಳುತ್ತಾನೆ. ಆಕಾಶವನ್ನು ಹೊದ್ದಿಕೆಯಾಗಿ ಹೊದ್ದು, ಭೂಮಿಯನ್ನು ತೊಟ್ಟಿಲಾಗಿ ಪವಡಿಸಿ, ಸೂರ್ಯ ನಕ್ಷತ್ರಗಳನ್ನು ದೀವಟಿಗೆಗಳಾಗಿ ಸ್ವೀಕರಿಸಿ, ಸ್ವಾಮಿ ರಾಚಪ್ಪಾಜಿ ದೀರ್ಘವಾದ ಯೋಗ ನಿದ್ರೆಗೆ ಹೋಗಿಬಿಡುತ್ತಾರೆ.

ಅವರ ಗದ್ದಿಗೆ ನಿಜದ ಕುರುಹಾಗಿ ಭಕ್ತರನ್ನು ಹರಿಸುತ್ತಾ ಬಂದಿದೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
28. ಸಿದ್ಧರ ಗೆದ್ದ ಸಿದ್ದಪ್ಪಾಜಿ - ಶಾಪ ನೀಡಿದ ರಾಚಪ್ಪಾಜಿ (ಮುಕ್ತಾಯ ಸಂಚಿಕೆ)   

👈 ಹಿಂದಿನ ಸಂಚಿಕೆ:
26. ಹಿರಿಯ ಗುರು ರಾಜೇಂದ್ರಸ್ವಾಮಿ ಮತ್ತು ರಾಜ ಪಟ್ಟದ ವೀರಭದ್ರಸ್ವಾಮಿಗಳಿಗೆ ಸ್ವಾಮಿ ನೆಲೆತೋರಿಸುತ್ತಾರೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/fjdRc5
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/e874JD
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/P6YygS
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 26)

26. ಹಿರಿಯ ಗುರು ರಾಜೇಂದ್ರಸ್ವಾಮಿ ಮತ್ತು ರಾಜ ಪಟ್ಟದ ವೀರಭದ್ರಸ್ವಾಮಿಗಳಿಗೆ ಸ್ವಾಮಿ ನೆಲೆತೋರಿಸುತ್ತಾರೆ.

ಹಿರಿಯಗುರು ರಾಜೇಂದ್ರಸ್ವಾಮಿಗಳು ಮತ್ತು ರಾಜಪಟ್ಟದ ವೀರಭದ್ರಸ್ವಾಮಿಗಳಿಗೆ ಆಶೀರ್ವಚನವನ್ನು ಆದಿಮೂರ್ತಿ ದಯಪಾಲಿಸುತ್ತಾ,
  "ನಿಮಗೆ ನಾವು ಬಸವನ ಬೆಟ್ಟವನ್ನು ಬೆಳ್ಳಿಯನ್ನಾಗಿಯೂ ಕುಂದೂರು ಬೆಟ್ಟವನ್ನು ಚಿನ್ನವನ್ನಾಗಿಯೂ ಮಾಡಿಕೊಡುವುದಾಗಿ ಅಪ್ಪಣೆ ಕೊಡಿಸಿದ್ದೆವು ಆದರೆ, ಈಗ ಕಲಿ ಬಹಳವಾಗಿ ಪ್ರಬಲ ಬಿಟ್ಟರುವುದರಿ೦ದ ನಿಮಗೆ ಅಷ್ಟೆಲ್ಲಾ ಐಶ್ವರ್ಯಾದಿಗಳು ದೊರೆತುಬಿಟ್ಟಿದೇ ಆದರೆ ಜನರು ನಿಮ್ಮನ್ನು ಊಟಕೂಡ ಮಾಡಲು ಬಿಡುವುದಿಲ್ಲ. ಆದರೂ ನಾವು ಪಾತಾಳದಲ್ಲಿನ ಯೋಗ ಮುಗಿಸಿ, ಮೇಲೆ ಬಂದಾ ಮೇಲೆ ನಿಮ್ಮಗಳಿಗೆ ಕೊಟ್ಟಿರುವ ವಚನವನ್ನು ಪಾಲಿಸಿಕೊಡುತ್ತೇವೆ.
  "ಆಗ ಇದೇ ಕುಂದೂರು ಬೆಟ್ಟ ಚಿನ್ನವಾಗುತ್ತದೆ ಬಸವನ ಬೆಟ್ಟ ಬೆಳ್ಳಿಯಾಗುತ್ತವೆ. ಆದರೂ, ಈಗಲೂ ಇಲ್ಲಿನ ಆದಾಯವೇ ಆ ಚಿನ್ನ ಬೆಳ್ಳಿಗಿಂತಲೂ ಮಿಗಿಲಾಗುತ್ತದೆ, ಚಿಕ್ಕಲ್ಲೂರು ಜಾತ್ರೆ ಜಗತ್ಪ್ರಸಿದ್ಧವಾಗುತ್ತದೆ. ಕಪ್ಪಡಿ ಕ್ಷೇತ್ರ ಹಿರಿದಾಗುತ್ತದೆ. ನೀಲಿ ಪಣತ ಕಪ್ಪಕಾಣಿಕೆಗಳು ನಾಲ್ಕೂ ಕಡೆಗಳಿಂದ ಬರುತ್ತವೆ. ಅವುಗಳನ್ನೆಲ್ಲಾ ನೀವೆ ಸ್ವೀಕರಿಸಿ, ನಮ್ಮ ಆಂತರ್ಯದಲ್ಲಿ ದೃಢ ಶ್ರದ್ಧೆ ಭಕ್ತಿ ಇಟ್ಟು ನಮ್ಮನ್ನು ಮುಟ್ಟಿ ಪೂಜಾದಿಗಳನ್ನು ಸಲ್ಲಿಸಿಕೊಂಡು ಹೋಗುತ್ತೀರಿ ನೀವು ನಮಗೆ ಸ್ವಾಮಿಗಳಾಗುತ್ತೀರಿ. ಹಿರಿ ದೊರೆಯ ಮಗನೆ, ಹಿರಿಗುರು ರಾಜೇಂದ್ರ ಸ್ವಾಮಿಗಳೇ, ಕಿರಿದೊರೆಯ ಮಗನೇ, ರಾಜಪಟ್ಟದ, ವೀರಭದ್ರ ಸ್ವಾಮಿಗಳೇ ನೀವು ಬೊಪ್ಪಣಪುರದ ಸ್ವಾಮಿಗಳಾಗಿರಪ್ಪ, ಅವರೊಂದು ವರ್ಷ ನೀವು ಒಂದು ವರ್ಷ ಜಾತ್ರೆಯನ್ನು ನಡೆಸಿಕೊಂಡು, ನಮ್ಮ ಹೆಸರಿನಲ್ಲಿ ಬರುವ ಕಾಣಿಕೆಯನ್ನು ನೀವೇ ಸ್ವೀಕರಿಸಿಕೊಂಡು ಪರಂಪರೆಗಳಿಗೆಲ್ಲಾ ಮಾರ್ಗದರ್ಶಕರಾಗಿ ಬಾಳಿರಿ." ಎಂದು ಸ್ವಾಮಿ ಆದಿ ಪರಮ ಪರಂಜ್ಯೋತಿಗಳ ಪಾತಾಳ ಬಾವಿಯ ಒಳಗೆ ಬೇಗ ಬೇಗ ಬರುತ್ತಾರೆ, ಬಾವಿಯ ಸುಪ್ತತ ಶರಣಾದಿಯಾಗಿ ಸಮಸ್ತ ಭಕ್ತರೂ ನೆರೆದಿದ್ದಾರೆ.

  "ತಾಯಿ ಇಲ್ಲದವರಿಗೆ ತಾಯಿಯಾಗಿದ್ದಿರಿ ಸ್ವಾಮಿ: ತಂದೆ ಇಲ್ಲದವರಿಗೆ ತಂದೆಯಾಗಿದ್ದಿರಿ ನೀವು ಸ್ವಾಮಿ, ನೀವು ಈಗ ಬಾವಿಯಲ್ಲಿ ಸಮಾಧಿಗೆ ಕುಳಿತು ನಮ್ಮಿಂದ ದೂರಾಗಿ ಬಿಡುತ್ತೀರಿ. ನಿಮ್ಮ ಶ್ರೀ ಪಾದವನ್ನು ನಾವು ಇನ್ನೆಂದಿಗೆ ಕಾಣುವುದು?
  ಎಂದು ನೆರೆದ ಭಕ್ತರೆಲ್ಲಾ ದುಃಖದಲ್ಲಿ ತೊಳಲಾಡತೊಡಗುತ್ತದೆ ಆಗ ಸ್ವಾಮಿ. "ಯೋಚಿಸಬೇಡಿ, ನಾನು ಪಾತಾಳಲೋಕದಿಂದ ಮೇಲೆ ಎದ್ದ ಕೂಡಲೇ ನಿಮ್ನೆನ್ನೆಲ್ಲಾ ಕರೆಸಿಕೊಳ್ಳುತ್ತೇನೆ ಎಂದು ಎಲ್ಲರಿಗೂ ತಮ್ಮ ಚರಮ ಅಪ್ಪಣೆಯನ್ನು ಕೊಟ್ಟುಬಿಡುತ್ತಾರೆ.

ಆಗ ನಮ್ಮ ಆದಿರೂಪಿ ನಿರ್ಗುಣ ಸ್ವಾಮಿ ಆಕಾಶವನ್ನು ಹೊದಿಕೆ ಮಾಡಿಕೊಂಡು. ಭೂಮಿಯನ್ನು ತೊಟ್ಟಿಲಾಗಿ ಮಾಡಿಕೊಂಡು ಸೂರ್ಯ ಚಂದ್ರಾದಿಗಳನ್ನು ತಾನು ದೀವಿಗೆಗಳನ್ನಾಗಿ ಮಾಡಿಕೊಂಡು, ಗುಡುಗು ಮಿಂಚನ್ನೇ ಶಂಕು ಜಾಗಟೆ ಮಾಡಿಕೊಂಡು ನರರ ಹಂಗು ನಮಗೆ ಬೇಡ ನಮ್ಮ ಹಂಗಲ್ಲೇ ಆ ನನ್ನ ಮಕ್ಕಳೆಲ್ಲಾ ಇರಲಿ' ಎಂದು ಹೇಳುತ್ತಾ ಪಾತಾಳಲೋಕಕ್ಕೆ ಇಳಿದು ಅಲ್ಲಿ ಪವಡಿಸಿಬಿಡುತ್ತಾರೆ.
  ಪಾತಾಳಲೋಕದ ಬಾವಿಯಲ್ಲಿ ಮೂರ್ತಗೊಂಡ ಸ್ವಾಮಿ ಆದಿಮೂರ್ತಿ ಕುಂದೂರ ಬೆಟ್ಟದ ಕಡೆ ನೆಟ್ಟದೃಷ್ಟಿ ನೆಡಲಾಗಿ, ಆ ಬೆಟ್ಟದಿಂದ ಎರಡು ಮಹಾಂತ ಪಡಗುಂಡು ಉರುಳಿಕೊಂಡು ಬಂದು, ಆ ಬಾವಿಯ ಬಾಯಿಗೆ ಸರಿಯಾಗಿ ಬಾಚಿಕೊಂಡು, ಆ ಪಡುಗುಂಡು ಬಾವಿಯ ಬಾಗಿಲಿಗೆ ಸರಿಯಾಗಿ ಒತ್ತರಿಸಿಕೊಂಡು ಬಿಡುತ್ತದೆ. ಆಗ ಮಂಟೇಸ್ವಾಮಿ ಒಳಗೆ ಯೋಗನಿದ್ರೆಗೆ ಇಳಿದುಬಿಡುತ್ತಾರೆ.
  ಜಗತ್ತಿನ ಕಲ್ಯಾಣಕ್ಕಾಗಿ ಅವರು ಯೋಗನಿದ್ರೆಯಲ್ಲಿ ಪವಡಿಸಿಬಿಡುತ್ತಾರೆ,

ಪರಂಜ್ಯೋತಿ ನೀವೇ ಬನ್ನಿ
ಸಿದ್ದು ಸಿದ್ಧರಿಗೆಲ್ಲಾ
ಅತಿ ಮುದ್ದು ಘನಲೀಲೆ
ಸಿದ್ದಯ್ಯ ಶಿವನೇ ಬನ್ನೀ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
27. ಮೈಸೂರು ಅರಸರ ದೇವ ನಿಧಿಯೇ ರಾಚಪ್ಪಾಜಿ (ಉಪಸಂಹಾರ)   

👈 ಹಿಂದಿನ ಸಂಚಿಕೆ:
25. ಶ್ರೀ ಚನ್ನಾಜಮ್ಮನಿಗೆ ಆಶೀರ್ವಾದ ಮತ್ತು ಶ್ರೀ ಸಿದ್ದಪ್ಪಾಜಿಯವರಿಗೆ ಚರಮ ಉಪದೇಶ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/h7XRKH
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/unz2ad
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/SjzPsf
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 25)

25. ಶ್ರೀ ಚನ್ನಾಜಮ್ಮನಿಗೆ ಆಶೀರ್ವಾದ ಮತ್ತು ಶ್ರೀ ಸಿದ್ದಪ್ಪಾಜಿಯವರಿಗೆ ಚರಮ ಉಪದೇಶ.

ಚನ್ನಾಜಮ್ಮ "ಪ್ರಭು ನನಗೆ ಏನು ಅಪ್ಪಣೆ ಕೊಡುವಿರಿ" ಎಂದು ಕೇಳುತ್ತಾಳೆ. "ನೀನು ನಿಶ್ಚಿಂತೆಯಿಂದ ರಾಚಪ್ಪಯ್ಯನ ಪಾದಗಳಲ್ಲಿ ಪವಡಿಸಿ ಬಿಡಮ್ಮ" ಎನ್ನುತ್ತಾರೆ. ಆಕೆ ಸ್ವಾಮಿಯ ಕಾಲಿಗೆ ಎರಗಿ "ಅಪ್ಪಣೆ, ನನ್ನ ತಂದೆ" ಎನ್ನುತ್ತಾಳೆ.

:: ಸಿದ್ದಪ್ಪಾಜಿಯವರಿಗೆ ಚರಮ ಉಪದೇಶ ::

"ಸ್ವಾಮಿ ಪರಮ ಪರಂಜ್ಯೋತಿ ನಿಮಗಾಗಿ ನಾನು ಪಟ್ಟ ಕಷ್ಟ ಅಷ್ಟು ಇಷ್ಟು ಅಲ್ಲ. ನನ್ನ ನೀಷ್ಕಾಮ ಕರ್ಮಕ್ಕೆ ನಾವು ಏನನ್ನು ಆಶೀರ್ವದಿಸಿದರೂ ಅದೇ ನನಗೆ ಅಮೃತ" ಎಂದು ಸಿದ್ದಯ್ಯ ಸ್ವಾಮಿ ಆದಿ ಗುರುವಿಗೆ ನಮಸ್ಕರಿಸಿ ಕೇಳುತ್ತಾರೆ.

"ನಿನಗೆ ಇಲ್ಲಿ ಎಲ್ಲಿಯೂ ಸ್ಥಳವಾಗುವುದಿಲ್ಲ. ಸ್ವಾಮಿ, ಚಿಕ್ಕಲ್ಲೂರಿನಲ್ಲಿ ಸ್ಥಳ ಆದರೂ ಆಗುವ ಸಾಧ್ಯತೆ ಇದೆ. ಈಗ ಅಲ್ಲಿ ಏಳು ಜನ ಋಷಿಗಳಿದ್ದಾರೆ. ಅವರುಗಳಿಗೂ ನಿಮಗೂ ಒಂದು ಸತ್ವ ಪರೀಕ್ಷೆಯ ಪವಾಡ ಜರಗುವುದಿದೆ. ನೀನೇ ಆಗ ಗೆದ್ದುದೇ ಆದರೆ ಅವರುಗಳ ಮಠ ಮಾಳಿಗೆಗಳೆಲ್ಲ ನಿನ್ನ ವಶವಾಗುತ್ತದೆ. ಅಲ್ಲಿ ನೀನು ಐದು ದಿನಗಳ ಜಾತ್ರೆಯನ್ನು ವರ್ಷಂಪ್ರತಿ ನಡೆಸಿಕೊಂಡು, ಚಿಕ್ಕಲ್ಲೂರನ್ನೇ ನೆಲೆಯಾಗಿ ಸ್ವೀಕರಿಸಿ, ಆ ಕ್ಷೇತ್ರದ ಉಜ್ವಲ ಬೆಳವಣಿಗೆಗೆ ಕಾರಣನಾಗು, ಸಿದ್ಧ" ಎಂದು ಸಿದ್ದಪ್ಪಾಜಿಗೆ ಆಶೀರ್ವಾದ ಮಾಡುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
26. ಹಿರಿಯ ಗುರು ರಾಜೇಂದ್ರಸ್ವಾಮಿ ಮತ್ತು ರಾಜ ಪಟ್ಟದ ವೀರಭದ್ರಸ್ವಾಮಿಗಳಿಗೆ ಸ್ವಾಮಿ ನೆಲೆತೋರಿಸುತ್ತಾರೆ.   

👈 ಹಿಂದಿನ ಸಂಚಿಕೆ:
24. ಶ್ರೀ ರಾಚಪ್ಪಾಜಿಗೆ ಕಲ್ಯಾಣವನ್ನು ಅಪ್ಪಣೆ ಕೊಡಿಸುತ್ತಾರೆ ಮತ್ತು ಫಲಾರದಯ್ಯನವರಿಗೆ ಸ್ವಾಮಿ ಆದಿರೂಪಿ ಕೊಡಿಸಿದ ಅಪ್ಪಣೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/PRMPEf
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/syt8iv
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/VGDVbV
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 24)

24. ಶ್ರೀ ರಾಚಪ್ಪಾಜಿಗೆ ಕಲ್ಯಾಣವನ್ನು ಅಪ್ಪಣೆ ಕೊಡಿಸುತ್ತಾರೆ ಮತ್ತು ಫಲಾರದಯ್ಯನವರಿಗೆ ಸ್ವಾಮಿ ಆದಿರೂಪಿ ಕೊಡಿಸಿದ ಅಪ್ಪಣೆ.

ಇನ್ನೆನು ಸ್ವಾಮಿ ಮಂಟೇದ ಅಯ್ಯ ಬಾವಿಗೆ ಇಳಿದು ಹೋಗಿ ಪವಡಿಸಿಬಿಡಬೇಕು ಆಗ ರಾಚಪ್ಪಾಜಿ ಬಂದು, ಸ್ವಾಮಿಯ ಪಾದಕ್ಕೆ ಎರಗಿ, "ನಮಗೆ ಕಲ್ಯಾಣದ ಅಪ್ಪಣೆ ಕೊಡಿಸುವುದಾಗಿ ತಿಳಿಸಿದ್ದೀರಿ. ಪ್ರಭು ಅದನ್ನು ತಾವು ಮಾಡಿಕೊಟ್ಟು ಉಪಕರಿಸಬೇಕು."__ ಎನ್ನುತ್ತಾರೆ. ಆಗ ಸ್ವಾಮಿ ಆಗಲೆಂದು ಮನಸಾ ಒಪ್ಪಿ ತೋಪಿನ ದೊಡ್ಡಮ್ಮ ತಾಯಿಗೆ ಕೆಂಡಗಣ್ಣ ರಾಚಪ್ಪಯ್ಯನಿಗೆ ಸ್ನಾನ ಮಡಿಗಳನ್ನು ಮಾಡಿಸಿ, ಉರಿಗದ್ದಿಗೆಯ ಎದುರಿನಲ್ಲೇ ಸೀತಾಳೆ ಚಪ್ಪರ ಹಾಕಿಸಿ. ಹಸೆಮಣೆ, ಕಳಸ ಕನ್ನಡಿಗಳನ್ನು ಇಡಿಸಿ, ರಾಚಪ್ಪ ಅಯ್ಯನಿಗೂ ತೋಪಿನ ದೊಡ್ಡಮ್ಮ ತಾಯಿಗೂ ವೀರಕಂಕಣ ಕಟ್ಟಿಸಿ ದೂಪದೀಪಗಳನ್ನು ಬೆಳಗಿ, ಶುಭ ಲಗ್ನವನ್ನು ನೆರವೇರಿಸುತ್ತಾರೆ. ರಾಚಪ್ಪನ ಹಸ್ತದಿಂದ ದೊಡ್ಡಮ್ಮ ತಾಯಿಯ ಕೊರಳಿಗೆ, ದೊಡ್ಡಮ್ಮತಾಯಿಯ ಹಸ್ತದಿಂದ ರಾಚಪ್ಪನ ಕೊರಳಿಗೆ ಸಂಬಂಧಮಾಲೆಯನ್ನು ನೆರೆದ ಶಿವಗಣಗಳ ಮಧ್ಯೆ ಹಾಕಿಸಿ- ರಾಚರಾಯರ ಕೈಗಳಿಂದ ದೊಡ್ಡಮ್ಮ ತಾಯಿಯ ಕೊರಳಿಗೆ ಮಾಂಗಲ್ಯ ಸೂತ್ರವನ್ನು ಕಟ್ಟಿಸಿ, ಆಶೀರ್ವಚನ ನುಡಿಯುತ್ತಾರೆ.

"ನಿಮ್ಮ ಸ್ಥಳ ಕಪ್ಪಡಿ ಎನ್ನುವ ಪವಿತ್ರ ಸ್ಥಳ. ಅದು ಕಾವೇರಿ ಚದುರ ಮಧ್ಯೆ ತಿಪ್ಪುರು ರಾಮಸಮುದ್ರದ ಬಳಿ ಇದೇ ನೀವುಗಳಿಬ್ಬರೂ ಅಲ್ಲಿ ಹೋಗಿ, ಆ ಕ್ಷೇತ್ರದ ಮಹಿಮೆಯನ್ನು ಪ್ರಜ್ವಲಿಸಿ ಬಾಳಿ."
  ಎಲ್ಲರಿಗೂ ಅಪರಿಮಿತವಾದ ಆನಂದವಾಗುತ್ತದೆ.

:: ಫಲಾರದಯ್ಯನವರಿಗೆ ಸ್ವಾಮಿ ಆದಿರೂಪಿ ಕೊಡಿಸಿದ ಅಪ್ಪಣೆ ::

ಫಲಾರದಯ್ಯನವರು ಬಂದು ಆದಿರೂಪಿಗೆ ನಮಸ್ಕರಿಸಿ "ನನಗೆ ಏನನ್ನು ಅಪ್ಪಣೆಕೊಡುವಿರಿ?" ಎಂದು ಕೇಳುತ್ತಾರೆ. ಆಗ ಸ್ವಾಮಿ, "ಎಲೈ ಫಲಾರದಯ್ಯ, ನಿನ್ನ ಸ್ಥಳ ಇದಲ್ಲ, ಮಲ್ಲಿಗೆಕಾನ ಎಂಬುವನು ಏಳು ಒಂಟೆಗಳ ಮೇಲೆ ದೇವ ಪುರಾಣದಿಗಳನ್ನು ಏರಿಕೊಂಡು ದೇವ ಮಾನವರನೆಲ್ಲಾ ಸೆರೆಹಿಡಿದು ಕರೆದುಕೊಂಡು ಬರುತ್ತಿರುತ್ತಾನೆ. ನೀನು ಅವನ ಏಳು ಒಂಟೆ ಪುರಾಣಗಳನ್ನೆಲ್ಲಾ ನೀನು ಸುಟ್ಟು ಭಸ್ಮಮಾಡಿ ಆ ಮಲ್ಲಿಗೆಕಾವನನ್ನು ಗೆಲ್ಲಬೇಕು. ಅದಕ್ಕಾಗಿ ನೀನು ಮುಟ್ಟನ ಹಳ್ಳಿ ತೋಪಿನಲ್ಲಿ ಪವಡಿಸು ಹೋಗು" ಎಂದು ಹೇಳಿ ಆತನ ಮೈ ದಡವಿ ಆಶೀರ್ವಾದ ಮಾಡುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
25. ಶ್ರೀ ಚನ್ನಾಜಮ್ಮನಿಗೆ ಆಶೀರ್ವಾದ ಮತ್ತು ಶ್ರೀ ಸಿದ್ದಪ್ಪಾಜಿಯವರಿಗೆ ಚರಮ ಉಪದೇಶ.  

👈 ಹಿಂದಿನ ಸಂಚಿಕೆ:
23. ಆದಿ ಬೊಪ್ಪಗೊಂಡನ ಪುರದಲ್ಲಿ ಪಾಂಚಾಳದವರು.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/AAbcwb
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/nxgY4J
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/5RyKHN
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 23)

23. ಆದಿ ಬೊಪ್ಪಗೊಂಡನ ಪುರದಲ್ಲಿ ಪಾಂಚಾಳದವರು.

ಸ್ವಾಮಿ ಸಿದ್ದಯ್ಯ ಆ ಏಳುಾ ಮಂದಿಗೆ ಆಗಲೇ ಸ್ನಾನ ಮಾಡಿಸುತ್ತಾರೆ. ಮಡಿ ತೊಡಿಸುತ್ತಾರೆ. ಲಾಂಛನ ಕಟ್ಟಿಸುತ್ತಾರೆ. ಗುರುಭೋದೆ ಮಾಡುತ್ತಾರೆ. ಅವರೆಲ್ಲರಿಗೆ ಧಣಿಗಳೆನ್ನುವ ಹೆಸರನ್ನು ತೆಗೆದು ಹೊಸ ಶಿವಭಕ್ತರ ಹೆಸರನ್ನು ಕರುಣಿಸುತ್ತಾರೆ. ಮುಂದೆ ಈ ಏಳು ಜನರುಾ ನೀಲಗಾರರಾಗಿ ಸ್ವಾಮಿಯ ಶಕ್ತಿಯನ್ನು ಜಗತ್ತಿಗೆ ಪ್ರಕಾಶಪಡಿಸುತ್ತಾರೆ.
  ಈ ಏಳೂ ಜನರನ್ನು ಕರೆದುಕೊಂಡು ಹೋಗಿ ಹೊಲದಲ್ಲಿ ಹೆಣವಾಗಿ ಬಿದ್ದಿದವರೆಲ್ಲಾ ತೀರ್ಥ ಪ್ರೋಕ್ಷಣೆಯಿಂದ ಜೀವಕೊಟ್ಟು ಮೇಲೇಳಿಸಿ ಹಲಗೂರಿಗೆ ಸ್ವಾಮಿ ಕಳುಹಿಸಿಕೊಡುತ್ತಾರೆ.
  ಆಗ ಏಳು ಜನ ಘನ ನೀಲಗಾರರುಾ ಕಾಳಿಕಾ ಮತ್ತು ಭವಾನಿ ಎನ್ನುವ ಕುಲುಮೆಗಳನ್ನು ಸಾರಿಸಿ ಗುಡಿಸಿ. ಪೂಜಿಸಿ ಹತ್ತಿಸಿ' ಪರಮ ಜ್ಯೋತಿಯವರಿಗಾಗಿ ನಗಾದಿಗಳನ್ನು ಮಾಡಲು ಹೊರಟು, ಬೇಳೆ, ಬಿರುವಿನ ಕೊಂಬು ಕಹಳೆ, ನಗರಿ, ಹುಯ್ಯಿಲು ದಮ್ಮಟೆ ಇತ್ಯಾದಿಗಳನ್ನೆಲ್ಲಾ ಎರಕ ಹುಯ್ಯುತ್ತಾರೆ ಮತ್ತು ಅವುಗಳನ್ನು ಭಯ ಭಕ್ತಿಗಳಿಂದ ತಂದು ಸ್ವಾಮಿ ಸಿದ್ದಯ್ಯನವರಿಗೆ ಚಿನ್ನದ ತೊಟ್ಟಿಲು ಬೆಳ್ಳಿಯ ಸರಪಳಿಯ ಸಮೇತ ಅರ್ಪಿಸುತ್ತಾರೆ.
  ಆಗ ಸ್ವಾಮಿ ಸಿದ್ದಯ್ಯ ಆ ಏಳುನೂರೈವತ್ತ ಪಾಂಚಾಳರ ಕೈಯಲ್ಲೂ ಅವುಗಳನ್ನೆಲ್ಲಾ ಹೊರಸಿಕೊಂಡು, ಏಳು ಜನ ನೀಲಗಾರರನ್ನು ಕರೆದುಕೊಂಡು ಆದಿಯ ಬೊಪ್ಪಣಪುರಕ್ಕೆ ಬರುತ್ತಾರೆ, ಸ್ವಾಮಿಯ ಹೊಸ ಒಕ್ಕಲನ್ನು ಕಂಡು ತೋಪಿನ ದೊಡ್ಡಮ್ಮ ತಾಯಿಗೆ ಅಪಾರವಾದ ಸಂತೋಷವಾಗುತ್ತದೆ.
  ಉರಿಗದ್ದುಗೆಯ ಮೇಲೆ ಪವಡಿಸಿದ್ದ ಆದಿ ಪರಮ ಪರ೦ಜ್ಯೋತಿಗೆ ಎಲ್ಲರೂ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ ಸ್ವಾಮಿ ಆದಿಮೂರ್ತಿ ಆ ಕ್ಷಣವೇ ಎಳಂದೂರು ಲಿಂಗೇಗೌಡನನ್ನು ಕರೆಸಿ, ಹನ್ನೆರಡು ಕಂಡುಗ ಸಣ್ಣಕ್ಕಿ, ಆರು ಕಂಡುಗ ತೊಗರಿಬೇಳೆ ಮೊದಲಾದವನ್ನೆಲ್ಲಾ ತರಿಸಿ ಅಡುಗೆ ಮಾಡಿಸುತ್ತಾರೆ.
  ತೋಪಿನ ತಾಯಿ ಗದ್ದಿಗೆಯ ಬಳಿಯಿಂದ ಮಠದವರಿಗೆ ಏಳು ಪಂಕ್ತಿ ಮಾಡಿ ಕೂರಿಸುತ್ತಾರೆ ರಾಚರಾಯ ಎಲೆ ಬಡಿಸುತ್ತಾನೆ. ಫಲಾರದಯ್ಯ ಅಗ್ಗಣಿ ಹಾಕಿಕೊಂಡು ಹೋಗುತ್ತಾನೆ. ಹಿರಿಗುರು ರಾಜೇಂದ್ರಸ್ವಾಮಿ ಮತ್ತು ರಾಜ ಪಟ್ಟದ ಈರಭದ್ರಸ್ವಾಮಿ ಭಕ್ಷಗಳನ್ನು ಬಡಿಸುತ್ತಾರೆ, ಹತ್ತಾರು ವಾದ್ಯಗಳನ್ನು ಬಡಿಸಿ, ಸಾಂಬ್ರಾಣಿ ಹತ್ತಿಸಿ ಹಿಡಿದು, ಆದಿ ಮೂಲನನ್ನು ಧ್ಯಾನಿಸಿ, ಎಲ್ಲರನ್ನೂ ಊಟಮಾಡಲು ಕೇಳಿಕೊಳ್ಳುತ್ತಾರೆ. ಏಳು ಮಂದಿ ಧಣಿಗಳೂ ಒಂದೇ ಕಡೆ ಕುಳಿತಿದ್ದವರು, "ಯಾರು ಎಲೆಗೆ ಕೈ ಹಾಕಬೇಡಿ, ನಾವು ಮಾಡುತ್ತಿದ್ದ ಪದಾರ್ಥಗಳೆಲ್ಲಾ ತುಂಬ ಶ್ರೀಮಂತವಾಗಿದ್ದುವು." ಇವು ಶುದ್ಧಾ೦ಗವಾಗಿ ಬಡವರದಾಗಿವೆ, ನಡೆಯಿರಿ ಊರಲ್ಲೇ ಊಟ ಮಾಡೋಣ," ಎಂದು ಮೇಲೆದ್ದು, ಪಾಂಚಾಳರನ್ನೆಲ್ಲಾ ಏಳಿಸಿಕೊಂಡು ಹಲಗೂರಿನ ಕಡೆಗೆ ಹೊರಟುಹೋಗಿ ಬಿಡುತ್ತಾರೆ.
  ಆದಿ ಪರಮ ಪರಂಜ್ಯೋತಿಗೆ ಎಂತಹದ್ದೋ ಅನುಮಾನ ಬಂದು, ಯಾಕೋ ಕಾಣೆ ಕಡೆಯ ಬಾಗಿಲಲ್ಲಿ ಪಾಂಚಾಳದವರ ಸದ್ಧೇ ಇಲ್ಲವಲ್ಲಾ ಎಂದುಕೊಂಡು ಹೊರಬಂದು ನೋಡುತ್ತಾರೆ. ಹೆಸರಿಗೆ ಎಂದು ಒಬ್ಬ ಪಾಂಚಾಳನೂ ಅಲ್ಲಿ ಇರುವುದಿಲ್ಲ. ಸ್ವಾಮಿ ಸಿದ್ದಯ್ಯನನ್ನು ಕರೆಸಿ "ಏಕೆ ಹೀಗಾಯಿತು?_ ನಿನ್ನ ಬೋಧೆಯಿಂದಾಗಿ ಅವರು ಇನ್ನೂ ಭಕ್ತರಾದ೦ತೆ ಕಾಣುತ್ತಿಲ್ಲ" ಎನ್ನುತ್ತಾರೆ.
  ಸಿದ್ದಯ್ಯ ಸ್ವಾಮಿ "ಗುರುವೇ, ತಪ್ಪು ಅವರದಲ್ಲ, ನನ್ನನ್ನು ನೀವು ದೊಡ್ಡ ಮನಸ್ಸು ಮಾಡಿ ಕ್ಷಮಿಸಿ." ಎಂದು ಕ್ಷಮೆ ಕೇಳುತ್ತಾರೆ. ತೋಪಿನ ದೊಡ್ಡಮ್ಮ ತಾಯಿ ಪ್ರಸಾದ ಹಾಳಾಗಬಾರದೆಂದು ಆದಿ ಪರ೦ಜ್ಯೋತಿಗೆ ನಮಸ್ಕಾರಮಾಡಿ, ಎಲ್ಲವನ್ನು ಒಂದೆಡೆ ಸೇರಿಸಿ, ಸ್ವೀಕಾರ ಮಾಡಿ ಕೆರೆಗೆಹೋಗಿ ಕೈತೊಳೆದು ಬಂದು ಮತ್ತೆ ಸ್ವಾಮಿ ಆದಿರೂಪನಿಗೆ ನಮಸ್ಕರಿಸಿ, "ಅಪ್ಪಣೆ ಪಾಲಿಸು ತಂದೆ, ಮಾರಿ ಹಿಂಡನ್ನು ಪಾಂಚಾಳ ಗೇರಿಗೆ ಅಟ್ಟಿ ಅವರಿಗೆ ತಕ್ಕ ಬುದ್ಧಿ ಕಲಿಸುತ್ತೇನೆ." ಎನ್ನುತ್ತಾರೆ.

  ಆದಿಮೂರ್ತಿ ನಕ್ಕು ಸುಮ್ಮನಾಗುತ್ತಾರೆ, ಸಿದ್ದಯ್ಯ ಮುತ್ತಿನ ಕಮಂಡಲವನ್ನು ತರುವ ನೆಪಹೇಳಿ ದುರ್ಗಿಯರ ಹಿಂಡನ್ನೇ ಕರೆದು ಕೇರಿಯತ್ತ ಕರೆದುಕೊಂಡು ಹೋಗುತ್ತಾ "ಅವರೂಪದ ಪ್ರಸಾದ ಸ್ವೀಕರಿಸದೆ ಹೋದ ಇವರಿಗೆ ಹುಣ್ಣಿಲ್ಲದ ಗಾಯ ಮಾಡಿ, ನೋವಿಲ್ಲದ ಬಂಧನಕೊಡಿ." ಎನ್ನುತ್ತಾರೆ.
   ಏಳು ದುರ್ಗೆಯರೂ ಪಾಂಚಾಳಗೇರಿ ನುಗ್ಗಿ ಆನಂದಿಸುತ್ತಾ ಹೋಗುತ್ತಾರೆ. ಪಾಂಚಾಳರಿಗೆ ಹುಣ್ಣಿಲ್ಲದ ಗಾಯ ನೋವಿಲ್ಲದ ಬಂಧನ ಸಹಿಸಲಾಗದೇ "ಅಯ್ಯೋ ತಪ್ಪು ಮಾಡಿವೆವು ಮತ್ತೆ!_ ಸತ್ತರೂ ಅಲ್ಲೇ ಬದುಕಿದರೂ ಅಲ್ಲೇ ಇರುತ್ತೇವೆ ಇನ್ನು ಮುಂದೆ" ಎಂದುಕೊಂಡು ಮತ್ತೆ ಆದಿ ಬೊಪ್ಪಣಪುರಕ್ಕೆ ಬರುತ್ತಾರೆ, ಬಂದು ಆದಿರೂಪರಿಗೆ ದೀರ್ಘ ಪ್ರಣಾಮಮಾಡಿ. "ತಪ್ಪನ್ನು ಮನ್ನಿಸಿ ಕೃಪೆಮಾಡಿ ಕಾಪಾಡಿ ಎನ್ನುತ್ತಾರೆ. ಆದಿ ಮೂಲರು ಮತ್ತೆ ನಕ್ಕು ಹಾಗಾದರೆ" ಮತ್ತೆ ಅಡುಗೆ ಮಾಡಿಡುತ್ತೇವೆ, ಊಟಮಾಡಿ ಎನ್ನುತ್ತಾರೆ ಪಾಂಚಾಳದವರೆಲ್ಲ ತಮ್ಮ ನೀಲಗಾರರೊಡನೆ ಒಪ್ಪುತ್ತಾರೆ.
  ಯಳಂದೂರು ಲಿಂಗೇಗೌಡನಿಗೆ ಮತ್ತೆ ಅವಸರದ ಕರೆ ಹೋಗುತ್ತದೆ. ಆರು ಕ೦ಡುಗ ಮುಗ್ಗಲು ಹುರುಳಿ ಹನ್ನೆರಡು ಕಂಡುಗ ಹುಚಾರ್ಕವಟ್ಟೆ ಮೇಲಣ ಮುದಿಯಾಲದ ಸೊಪ್ಪನ್ನು ತರಿಸುತ್ತಾರೆ, ಎರಡು ಅಡಿಗೆ ಮೆಣಸಿನಕಾಯಿ ತರಿಸಿ ಹುಬ್ಬಾರ್ಕದ ಹಿಟ್ಟನ್ನು ಮಾಡಿಸೀ ಮುದ್ದಾಲೆ ಸೊಪ್ಪಿನ ಮುಗ್ಗಲ ಹುರುರ್ಲಿಯ ಸಾರನ್ನು ಮಾಡಿಸುತ್ತಾರೆ.
  ಪಾಂಚಾಳದವರು ಸ್ನಾನ ಮಡಿ ಮಾಡಿಕೊಂಡು ಏಳು ಪ೦ಙಯಾಗಿ ಊಟಕ್ಕೆ ಕೂರುತ್ತಾರೆ. ಹಿರಿಯ ಶರಣರೇ ಊಟಕ್ಕೆ ಬಡಿಸುತ್ತಾರೆ. ಪ್ರತಿಯೊಬ್ಬನ ಎಲೆಗೂ ಎರಡು ಬೇಲದ ಕಾಯಿ ಗಾತ್ರಕ್ಕೆ ಆರ್ಕದ ಹಿಟ್ಟನ್ನು ಬಡಿಸುವಂತೆ ಸ್ವಾಮಿ ಪ್ರಭುದೇವರು ಆಜ್ಞೆ ಮಾಡುತ್ತಾರೆ. ಮುದಾಲೆ ಸೊಪ್ಪು ಮುಗ್ಗಲು ಹುರುಳಿಯ ಉಪ್ಪೆಸರನ್ನೇ ಎಲ್ಲರಿಗೂ ಎರಡೆರಡು ಮೆಣಸಿನಕಾಯಿನ ಜೊತೆಯಲ್ಲಿ ಬಡಿಸುವಂತೆ ಆಜ್ಞೆಯಿತ್ತರು. ಧೂಪ ಹಾಕಿ, ಪ೦ಙಗೆ ಕೈ ಮುಗಿದು "ಊಟಮಾಡಿ ನನ್ನ ಪ್ರೀತಿಯ ಕಂದಮ್ಮಗಳೇ; ಎಂದು ಶತೆಯ ಬಾಗಿಲಿಗೆ ಒರಗಿ ಸ್ವಾಮಿ ನಿಲ್ಲುತ್ತಾರೆ. ಪಾ೦ಚಾಳದವರು ಊಟಮಾಡಿ ಎಷ್ಟೋ ದಿನಗಳಾಗಿ ಹೋಗಿವೆ. "ನಮ್ಮ ಅಪ್ಪಂದಿರ ಕಾಲದಲ್ಲೂ ನಾವು ಇ೦ತಹ ಊಟ ಕಂಡು ಅರಿಯವ್ವ" ಎಂದು ಅವರುಗಳು ಹೇಳುತ್ತಾ ಹಸಿದ ಬರದಲ್ಲಿ ತಿನ್ನುವಂತೆ ಆ ಊಟವನ್ನು ತಿನ್ನುತ್ತಾರೆ, ನಂತರ ಕೈ ತೊಳೆದು ಅಗ್ಗಣಿಯನ್ನು ಪ್ರವೇಶಿಸಿ, ಸ್ವಾಮಿ ಪ್ರಭುದೇವರ ಕಾಲುಗಳಿಗೆ ಸಾಷ್ಟಾಂಗ ಎರಗುತ್ತಾರೆ. ಅಹಂಕಾರವನ್ನು ಒಪ್ಪಿಸಿಕೊಳ್ಳಿ ಸ್ವಾಮಿ, ನಮ್ಮ ಬರುದ೦ದಿ ಹಿರಿಮೆಗಳನ್ನೆಲ್ಲಾ ನಿಮ್ಮ ಪಾದಗಳ ತಲದಲ್ಲಿ ಸಮರ್ಪಿಸಿದ್ದೇವೆ ನಮಗೆ ನಿಮ್ಮ ಆಶೀರ್ವಾದದ ಶ್ರೀರಕ್ಷೆ ಬೇಕು' ಎನ್ನುತ್ತಾರೆ. ಆಗ ಗುರು "ಓ ಪಾಂಚಾಳದವರೇ, ಸಿದ್ದಪ್ಪಾಜಿಯ ಹೊಟ್ಟೆ ಉರಿಸಿದ ತಪ್ಪಿಗೆ ನಾವು ಪವಡಿಸುವುದಕ್ಕೆ೦ದೇ  ಹನ್ನೆರಡಾಳುದ್ದ ಜಲದೇವಿ ತೆಗೆಯಿರಿ" ಎಂದು ಹೇಳುತ್ತಾರೆ.
  ಅವರ ಮಾತಿಗೆ ಪ್ರಕಾರ ಒಂದು ಶುಭ ಸೋಮವಾರ ಗುದ್ದಲಿ ಪೂಜೆಮಾಡಿ, ಹನ್ನೆರಡಾಳುದ್ದದ ಜಲಬಾವಿಯನ್ನು ಪಾಂಚಾಳದವರು ತೆಗೆಯುತ್ತಾರೆ. ನಾಲ್ಕು ನಂದಾದೀವಿಗೆಯ ಗೂಡನ್ನು ತೆಗೆಯುತ್ತಾರೆ. ಲೀಲೆದ್ದು ಬಂದು ಸ್ವಾಮಿಯ ಸಿರಿ ಪಾದಕ್ಕೆ ಅಡ್ಡಬಿದ್ದು ಆಶೀರ್ವಾದ ಮಾಡಿ, ಧರ್ಮಗುರುವೇ," ಎನ್ನುತ್ತಾರೆ.
   "ಏಯ್ ಪಾಂಚಾಳಿಗರೇ, ನಿಮಗೇನು ಭಾಗ್ಯಬೇಕು?
ನೀವು ಸಾವಿರ ತಂದರೂ ಸಂಜೆಗೆ ಲಯವಾಗಿ ಹೋಗಲಿ, ಹಗಲಿಗೆ ಇದ್ದರೆ ರಾತ್ರಿಗೆ ಇಲ್ಲವಾಗಲಿ, ರಾತ್ರಿಗೆ ಇದ್ದರೆ ಹಗಲಿಗೆ ಮುಗಿಯಲಯ್ಯ, ನಿಮ್ಮ ಹೆಂಡಂದಿರು ರೈತರ ಮನೆಮನೆಗೆ ಹೋಗಿ ಭಿಕ್ಷೆ ಬೇಡಲಿ. ಊರಿಗೊಂದು ಬಿಕ್ಕಲಾಗಿ ಸೀಮೆಸೀಮೆ ಮೇಲೆ ಜೀವನ ಮಾಡಿ ಹೋಗಿ_' ಎಂದು ಶ'ಪಿಸಿ ಬಿಡುತ್ತಾರೆ. ಅದರಂತೆಯೇ ಶಾಪ ಸ್ವೀಕರಿಸಿದ ಪಾಂಚಾಳದವರು ಊರಿಗೊಂದು ಒಕ್ಕಲಾಗಿ ಪಂಚೆ ಹರಡಿ ಹೋಗುತ್ತಾರೆ.
  ಹನ್ನೆರಡಾಳುದ್ದ ಜಲಬಾವಿಗೆ ಕಂಡುಗ ಸಾಂಬ್ರಾಣಿ ಹಚ್ಚಿ "ಓಂ ನಮೋ ಹರಿಹರ" ಎಂದು ಶಿವಪೂಜೆ ಮಾಡುತ್ತಾರೆ. ಸ್ವಾಮಿ ಪ್ರಭು ದೇವರು ಗುರುಭೊಧೆ ಗುರುಮಂತ್ರವನ್ನು ವಿತರಣ ಮಾಡುತ್ತಾರೆ. ಚಿನ್ನದ ತೊಟ್ಟಿಲನ್ನು ಬೆಳ್ಳಿಯ ಸರಪಳಿಗಳಿಂದ ಕಟ್ಟಿ ಹನ್ನೆರಡಾಳುದ್ದದ ಬಾವಿಗೆ ಇಳಿಬಿಡುತ್ತಾ, ನಾಲ್ಕು ಗೂಡಲ್ಲೂ ದೀಪ ಹಚ್ಚಿ ಇಡುತ್ತಾರೆ.
  ಎಲ್ಲ ನೆರೆದ ಭಕ್ತರೂ ಉಘೆ ಉಘೇ ಎಂದು ಘೋಹಮಾಡುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
24. ಶ್ರೀ ರಾಚಪ್ಪಾಜಿಗೆ ಕಲ್ಯಾಣವನ್ನು ಅಪ್ಪಣೆ ಕೊಡಿಸುತ್ತಾರೆ ಮತ್ತು ಫಲಾರದಯ್ಯನವರಿಗೆ ಸ್ವಾಮಿ ಆದಿರೂಪಿ ಕೊಡಿಸಿದ ಅಪ್ಪಣೆ.  

👈 ಹಿಂದಿನ ಸಂಚಿಕೆ:
22. ಆದಿಬೀದಿಯಲ್ಲಿ ಹೆಣಗಳು, ಆಕಾಶದ ತುಂಬ ಹದ್ದುಗಳು ರಾಶಿಯಲ್ಲಿ ಪಾಂಚಾಳರ ಕೇರಿಗಳು.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/cyf2nd
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/eD2fTF
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/M1TVhL
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh